ಡಾ| ಕುಮಾರ್ ವಿಶ್ವಾಸ್ ಹಿಂದಿಯ ಪ್ರಸಿದ್ಧ ಕವಿಯಲ್ಲೊಬ್ಬರು. ಇವರ ಕವಿತೆಗಳನ್ನು ಪರಿಚಯಿಸಿದ್ದು ಲಂಡನ್ನಿನ ಗೆಳೆಯ ಇಶಾನ್ ಮಿಶ್ರ. ಇವರ ಕೆಲವೇ ಕವಿತೆಗಳನ್ನು ಯೂ ಟ್ಯೂಬ್ ನಲ್ಲಿ ಕೇಳಿದ್ದು, ಅದರ ಅನುವಾದದ ಪ್ರಯತ್ನ :)
ಹುಚ್ಚನಂತೆ ಅಲೆಮಾರಿಯಾದರೂ
ಭೂಮಿಯ ತುಡಿತ ಮೋಡಕ್ಕಷ್ಟೆ ತಿಳಿವಂತೆ
ಈ ವಿರಹದ ವೇದನೆ ತಿಳಿವುದು
ನಮ್ಮಿಬ್ಬರ ಮನಸ್ಸಿಗಷ್ಟೇ...
ಪ್ರೀತಿ ಎಂಬ ಮಧುರ ಯಾತನೆಗೆ
ಮೀರಾಳೂ ಬಲಿ, ರಾಧೆಯೂ ಕೂಡ, ನಾವೇನು ಹೊರತೆ?
ಎಲ್ಲರೂ ತಿಳಿದಂತೆ ನೀನೂ ತಿಳಿದರೆ ಇವು ಕಣ್ಣೀರು,
ಆ ಮಧುರ ಯಾತನೆ ಅರ್ಥವಾದರೆ ಇವು ಮುತ್ತು..
ಪ್ರೀತಿಯ ಮುತ್ತುಗಳೆಂದು ತಿಳಿದಿದೆ, ಆದರೆ ಅಳಲಾರೆ,
ಕುಡಿಯಲಾರೆ ನನ್ನೆದೆಯಲ್ಲಿನ ಪ್ರೀತಿ ಸಾಗರದಿಂದ,
ನೀ ದೂರವಾಗಿರಬಹುದು, ದೂರವಾಗದು ಈ ಭಾವ,
ನನ್ನವಳಾಗದವಳು, ಆಗೆ ನೀ ಯಾರವಳೂ!!
ದುಂಬಿ ಹೂವನರಸಿ ಸರಸಿದರೇನು ಆಶ್ಚರ್ಯ?
ನನ್ನೀ ಮನದಲ್ಲಿ ಆಸೆ ಮೂಡಿದರೇನು ಆಶ್ಚರ್ಯ?
ಕೇಳುತಿದ್ದೆ ಪ್ರೀತಿಯ ಕತೆಗಳನ್ನ ತವಕದಿಂದ,
ಕತೆಗಳನ್ನ ವಾಸ್ತವಿಸಿದರೆ ಆಶ್ಚರ್ಯ!!!