Friday 8 January 2010

ಪ್ರಯತ್ನ..

ಡಾ| ಕುಮಾರ್ ವಿಶ್ವಾಸ್ ಹಿಂದಿಯ ಪ್ರಸಿದ್ಧ ಕವಿಯಲ್ಲೊಬ್ಬರು. ಇವರ ಕವಿತೆಗಳನ್ನು ಪರಿಚಯಿಸಿದ್ದು ಲಂಡನ್ನಿನ ಗೆಳೆಯ ಇಶಾನ್ ಮಿಶ್ರ. ಇವರ ಕೆಲವೇ ಕವಿತೆಗಳನ್ನು ಯೂ ಟ್ಯೂಬ್ ನಲ್ಲಿ ಕೇಳಿದ್ದು, ಅದರ ಅನುವಾದದ ಪ್ರಯತ್ನ :)


ಹುಚ್ಚನಂತೆ ಅಲೆಮಾರಿಯಾದರೂ
ಭೂಮಿಯ ತುಡಿತ ಮೋಡಕ್ಕಷ್ಟೆ ತಿಳಿವಂತೆ
ವಿರಹದ ವೇದನೆ ತಿಳಿವುದು
ನಮ್ಮಿಬ್ಬರ ಮನಸ್ಸಿಗಷ್ಟೇ...


ಪ್ರೀತಿ ಎಂಬ ಮಧುರ ಯಾತನೆಗೆ
ಮೀರಾಳೂ ಬಲಿ, ರಾಧೆಯೂ ಕೂಡ, ನಾವೇನು ಹೊರತೆ?
ಎಲ್ಲರೂ ತಿಳಿದಂತೆ ನೀನೂ ತಿಳಿದರೆ ಇವು ಕಣ್ಣೀರು,
ಮಧುರ ಯಾತನೆ ಅರ್ಥವಾದರೆ ಇವು ಮುತ್ತು..


ಪ್ರೀತಿಯ ಮುತ್ತುಗಳೆಂದು ತಿಳಿದಿದೆ, ಆದರೆ ಅಳಲಾರೆ,
ಕುಡಿಯಲಾರೆ ನನ್ನೆದೆಯಲ್ಲಿನ ಪ್ರೀತಿ ಸಾಗರದಿಂದ,
ನೀ ದೂರವಾಗಿರಬಹುದು, ದೂರವಾಗದು ಈ ಭಾವ,
ನನ್ನವಳಾಗದವಳು, ಆಗೆ ನೀ ಯಾರವಳೂ!!


ದುಂಬಿ ಹೂವನರಸಿ ಸರಸಿದರೇನು ಆಶ್ಚರ್ಯ?
ನನ್ನೀ ಮನದಲ್ಲಿ ಆಸೆ ಮೂಡಿದರೇನು ಆಶ್ಚರ್ಯ?
ಕೇಳುತಿದ್ದೆ ಪ್ರೀತಿಯ ಕತೆಗಳನ್ನ ತವಕದಿಂದ,
ಕತೆಗಳನ್ನ ವಾಸ್ತವಿಸಿದರೆ ಆಶ್ಚರ್ಯ!!!